Saturday 20 August 2011

"ಸುತಪಿತನ ಕಥನ"

" ಸುತ"

ಸುತನೆಂಬ ಬಂಧುತ್ವ
ಅಷ್ಟೇ ಸಾಕಿತ್ತು
ನಿನಗೆ!
...ಆದರೇ ನೀ ಮಾಡಿದ್ದೇನು ?
ನಿನ್ನ ದುರಾಸೆಯ
ಲೋಭವು
ಪಿತನಾಧಿಪತ್ಯವ ಆಹುತಿ ಪಡೆಯಿತು!
ಬುದ್ಧಿಗೇಡಿ,ನೀ ಮಾಡಿದ್ದು ಸರಿನಾ?

"ಪಿತ"

ಸುತನ ವಾತ್ಸಲ್ಯಕೆ
ಜೋತು ಬಿದ್ದಿ
ನಿನ್ನ ಕರ್ತವ್ಯ ಮರತಿ!
ಧನ ದಾಹ,ಭೂ ದಾಹ
ಏನ ತಂದಿತು ನಿನಗೆ ?
ಜನ ಕೊಟ್ಟ ಕಿರೀಟ ಉರುಳಿ
ಮುಖಗೇಡಿಯಾದಿ!
ಹೊಣೆಗೇಡಿ,ಇದು ನಿನಗೆ ಬೇಕಿತ್ತೆ?
                     --ಬನವಾಸಿ ಸೋಮಶೇಖರ್.

No comments:

Post a Comment