Saturday 14 April 2012

ಸಮಾನತೆ ಕನಸಿಗೆ ಬೆಳಕು ನೀಡಿದ ಪ್ರಜಾವಾಣಿ.

ಮಾನ್ಯ ಸಂಪಾದಕರು,ಪ್ರಜಾವಾಣಿ ಬೆಂಗಳೂರು.

ಮಾನ್ಯರೆ,ಇಂದಿನ ಪ್ರಜಾವಾಣಿ ಪತ್ರಿಕೆಯನ್ನು ನೋಡುತ್ತಲೇ ಆನಂದಿತನಾದೆ.ಅಮೋಘ ಮತ್ತು ಅದ್ವಿತೀಯ ಸೌಂದರ್ಯವನ್ನು ಆಸ್ವಾದಿಸಿದ ಅನುಭವವಾಯಿತು.ಪತ್ರಿಕೆಗೆ ಇರುವ ಸಾಮಾಜಿಕ ಬದ್ಧತೆ, ಶೋಷಿತ ಹಾಗೂ ತುಳಿತಕ್ಕೊಳಗಾದ ಜನವರ್ಗದ ಬಗ್ಗೆ ಇರುವ ಶ್ರದ್ಧಾ ಕಾಳಜಿಯನ್ನು ತಿಳಿದು ಹರ್ಷಿತನಾದೆ.ಪ್ರಜಾವಾಣಿಯನ್ನು ಕಳೆದ 20 ವರ್ಷಗಳಿಂದ ಒಂದಿನವೂ ತಪ್ಪದೇ ಓದುತ್ತಿದ್ದೇವೆ.ಅದರ ತತ್ವ,ನೀತಿ,ಸಿದ್ಧಾಂತಗಳಿಗೆ ಮಾರುಹೋಗಿದ್ದೇವೆ.ಪ್ರೋ.ರಾಬಿನ್ ಜೆಫ್ರಿ ಮಾತುಗಳಿಂದ ಪ್ರೇರಿತರಾಗಿ ದಲಿತರ ನೋವು ನಲಿವುಗಳಿಗೆ ಸ್ಪಂದಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಾಬಾ ಸಾಹೇಬರ ಜನ್ಮ ದಿನದಂದು ಈ ದಿನದ (14-04-2012) ಸಂಚಿಕೆಯನ್ನು ಚಿತ್ತಾಕರ್ಷಕವಾಗಿ ಹೊರ ತಂದಿದ್ದೀರಿ.ಕರ್ನಾಟಕ ಮಾಧ್ಯಮ ಕ್ಷೇತ್ರದ ಇತಿಹಾಸ ಪುಟಗಳಲ್ಲಿ ಪ್ರಜವಾಣಿಯ ಈ ಸಂಚಿಕೆ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿತೆಂದು ಹೇಳ ಬಯಸುತ್ತೇನೆ.ದೇವನೂರು ಮಹಾದೇವರನ್ನು ಅತಿಥಿ ಸಂಪಾದಕರನ್ನಾಗಿ ಗೌರವಿಸುವ ಮೂಲಕ ಪತ್ರಿಕೆ ಹಿರಿಮೆಯನ್ನೇ ಮೆರೆದಿದೆ.ಅವರ ಹಸ್ತಾಕ್ಷರಗಳುಳ್ಳ " ಸಮಾನತೆ ಕನಸನ್ನು ಮತ್ತೆ ಕಾಣುತ್ತ" ಲೇಖನವನ್ನು ಓದಿ ರೋಮಾಂಚನವಾಯಿತು.ಪತ್ರಿಕೆಯ  ಪ್ರತಿ ಪುಟಗಳಲ್ಲೂ ದಲಿತರ ಬದುಕಿನ ನೈಜ ಸ್ಥಿತಿಗಳನ್ನು ಅನಾವರಣಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಜಾಗ್ರತಗೊಳಿಸಲಾಗಿದೆಸುದೇಶ ದೊಡ್ಡಪಾಳ್ಯ,ಡಾ.ನಟರಾಜು ಹುಳಿಯಾರ್,ಎಚ್.ಎ.ಅನಿಲ್ ಕುಮಾರ್,ಸುಬ್ಬು ಹೊಲೆಯಾರ್,ಎನ್.ಕೆ.ಹನುಮಯ್ಯ,ಡಾ.ಎಲ್.ಹನುಮಂತಯ್ಯ,ಇಂದೂಧರ ಹೊನ್ನಾಪುರ,ಪ್ರೊ.ರಾಜೇಂದ್ರ ಜೆನ್ನಿ,ಪ್ರೊ.ಗೋಪಾಲ್ ಗುರು,ಆನಂದ ತೇಲ್ ತುಂಬ್ಡೆ,ಕೆ.ಎಲ್.ಚಂದ್ರಶೇಖರ್ ಐಜೂರ್ ಮತ್ತು ಪ್ರೊ.ರವಿವರ್ಮ ಕುಮಾರ್ ಅವರುಗಳ ಲೇಖನ,ಬರಹಗಳು ಪರಿಪೂರ್ಣ ಮಾಹಿತಿಯನ್ನು ಹೊರತೆಗೆದಿದ್ದು ದಲಿತ ಪ್ರಜ್ಞೆಗೆ ಬೆಳಕು ನೀಡಿವೆ.ಅತಿಥಿ ಸಂಪಾದಕರ 'ಸಾಮಾಜಿಕ ಪೊಲೀಸರು ಅಗತ್ಯ'ಸಂಪಾದಕೀಯ ಬರಹವು ಸರ್ಕಾರದ ಕಣ್ಣು ತೆರೆಸುವಲ್ಲಿ ಸಫಲವಾಗಬುದೆಂದು ಭರವಸೆ ಮೂಡಿಸಿದೆ.ಇಂಥ ವಿನೂತನವಾದ ಪ್ರಯತ್ನಕ್ಕೆ ಕೈ ಹಾಕಿ ಸಾಕಾರಗೊಳಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆತ್ಮಕ್ಕೆ ಅಕ್ಷರಶಃ ಗೌರವಾದರಗಳನ್ನು ಸಲ್ಲಿಸಿದ್ದೀರಿ.ಪತ್ರಿಕೆಗೂ ಅದರ ಸಂಪೂರ್ಣ ಬಳಗಕ್ಕೂ ಅಭಿನಂದನೆಗಳು ಸಲ್ಲುತ್ತವೆ.ಈ ಕಾಯಕ ನಿರಂತರವಾಗಿ ಸಾಗುತ್ತಿರಲಿ.
 
 
        ತಮ್ಮ ಅಭಿಮಾನಿ

ಬನವಾಸಿ ಸೋಮಶೇಖರ.ಮ0ಗಳೂರು.
9480201994

3 comments:

  1. This comment has been removed by the author.

    ReplyDelete
  2. ಪ್ರಜಾವಾಣಿ ಒಂದು ಜವಾಬ್ದಾರಿಯುತ ಹಿರಿಯ ಪತ್ರಿಕೆ.

    ಅದರ ಸಾಮಾಜಿಕ ಕಳಕಳಿ ಮತ್ತು ಅದ್ವಿತೀಯ ತೌಲಿಕ ವರದಿ ಕಾಯ್ದುಕೊಂಡು ಬಂದ ಬಗೆ ಪ್ರಶಂಸನೀಯ.

    ReplyDelete
  3. Prajavani nijakku kannada adbhutavaada patrike, kelavomme congress kede swalpa 'biased' anta annisidaroo kuda yavattu adu ati yennisuva mattakke hogilla,
    nanu Prajavaniyannu odalu shuru maadiddu nanna 5ne varshadinda, nanu odalu kalitidde prajaavaniyinda annabahudu:)
    naanu mundina vidyabhyasakkoskara urannu bittamele hostelgalalli baruva patrigelannu avalambisabekaagi bandaroo prajaavaniya melinna nanna preeti yallishtu kadime aagilla

    ReplyDelete