Saturday 20 August 2016

ನೆನಪಿಡಬೇಕಾದವರು: ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ "ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು."

 
   
                       
ನೆನಪಿಡಬೇಕಾದವರು : ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ
ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು.

    ಸನ್ 2015 ಅಗಷ್ಟ್ ಮಾಹೆಯ ಕೊನೆ ವಾರದಲ್ಲಿ ಒಂದು ದಿನ, ವಿಜಯಪುರ ಜಿಲ್ಲೆಯ ಅಧಿಕಾರಿ ವಲಯದಲ್ಲಿ ತಮ್ಮನ್ನು ಮುಂಚೂಣಿ ವ್ಶಕ್ತಿಯಾಗಿ ಗುರುತಿಸಿಕೊಂಡಿದ್ದ ಶ್ರೀಯುತ ವಿನಯಕುಮಾರ್ ಕುಲಕರ್ಣಿ ಇವರು ಪ್ರವಾಸೋದ್ಯಮ ಇಲಾಖೆಯ ಬೆಳಗಾವಿ ವಿಭಾಗದ ಕಛೇರಿಗೆ ಕಂದಾಯ ಇಲಾಖೆಯಿಂದ ವರ್ಗಾವಣೆಗೊಂಡು  ಸಹಕಾರ ಇಲಾಖೆಯವರಾಗಿದ್ದ ಶ್ರೀ ಬಿ.ಸುರೇಶ ರಾವ್ ಇವರಿಂದ ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು.

    ಬಸವನ ಬಾಗೇವಾಡಿ ತಹಶೀಲ್ದಾರರಾಗಿದ್ದ ಶ್ರೀ ವಿನಯಕುಮಾರ್ ಕುಲಕರ್ಣಿ ಅವರನ್ನು  ಪ್ರೀತಿ ಮತ್ತು ಆದರದಿಂದ  ನಾನು ಮತ್ತ್ತು ನನ್ನ  ಸಹದ್ಯೋಗಿಗಳು ಬರಮಾಡಿಕೊಂಡಿದ್ದೆವು.ನೋಡಲು ಸುರದೃಪಿಯಾಗಿರುವ  ಉದ್ದನೆಯ ಹಾಗೂ ನೀಳಕಾಯ ವ್ಯಕ್ತಿತ್ವವನ್ನು ಅವರು ಹೊಂದಿದ್ದರು.ಕೋಶ ಕಠಿನ ಬೀಜ ಮೃದುವಾದ ಕಾಯಿಯಂತಿರುವ ಅವರ ಕಾರ್ಯ ಶೈಲಿಯನ್ನು ತಿಳಿದುಕೊಳ್ಳಲು ನನಗೆ ಬಹಳ ದಿನಗಳು ಬೇಕಾಗಲಿಲ್ಲ! ಕ್ರಿಯಾಶೀಲ ಮನಸ್ಸಿನವರಾದ ಅವರು ಸರ್ಕಾರದ ಕೆಲಸವನ್ನು ಅತ್ಯಂತ ಶಿಸ್ತುಬದ್ಧವಾಗಿ,ಅಚ್ಚುಕಟ್ಟಾಗಿ ನಿರ್ವಹಿಸುವ ಛಾತಿ ಉಳ್ಳವರಾಗಿದ್ದರು.ನನ್ನ 14 ವರ್ಷಗಳ ಸೇವಾ ಅವಧಿಯಲ್ಲಿ ಇಂಥ ಸ್ಪಷ್ಟ,ನೇರ ನಿಲುವಿರುವ ಅಧಿಕಾರಿಯನ್ನು ಖಂಡಿತವಾಗಿಯೂ ನಾನು ನೋಡಿರಲಿಲ್ಲ.ಕಛೇರಿ ಕಾರ್ಯದಲ್ಲಿ ಬಿಗಿಯಾದ ಪಟ್ಟುಗಳಿದ್ದವರಾದರೂ ಸಹ ನನ್ನ ಹಾಗೂ ನಮ್ಮ  ಉಳಿದ ಸಹೋದ್ಯೋಗಿಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.ಇಲಾಖೆಗೆ ಯಾವುದೇ ಕೆಟ್ಟ ಹೆಸರು ಬರದಂತೆ ಎಲ್ಲರೂ ಅತ್ಯಂತ ಶಿಸ್ತು ಮತ್ತು ಕಾಳಜಿಯಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.ಕಛೇರಿಗೆ ಬರುವ ಯಾರನ್ನೇ ಆದರೂ ಪ್ರೀತಿ ಮತ್ತು ಅಭಿಮಾನದಿಂದ ಮಾತನಾಡಿಸುವಂತೆಯೂ ನೀವು ನೀಡುವ ಸಕಾರಾತ್ಮಕ  ಉತ್ತರವೇ ಅವರ ಅರ್ಧ ಸಮಸ್ಯೆಗೆ ಉತ್ತರವಾಗಿರಬೇಕು ಎಂದು ಹಿತವಚನ ನೀಡಿದ್ದರು.ಅವರ ಇಂಥ ನಡೆಯಿಂದ ನಾವು  ಕುಂದು ಕೊರತೆಯುಳ್ಳ ಅನೇಕ ಜನರ ಅಹವಾಲನ್ನು ಸರಾಗವಾಗಿ ನಿರ್ವಹಿಸಬಲ್ಲ ಜಾಣ್ಮೆಯನ್ನು ಪಡೆಯುವಂತಾಯಿತು.

ಇಲಾಖೆಯ ಅನೇಕ ಯೋಜನೆಗಳನ್ನು ತ್ವರಿತವಾಗಿ ಜ್ಯಾರಿಗೆ ತರುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದರು.ಅವರ ಹೆಜ್ಜೆಗೆ ಪ್ರತಿ ಹೆಜ್ಜೆಯಾಗಿ ನಾನು ಪೂರ್ವ ತಯಾರಿಯೊಂದಿಗೆ ಯಾವುದೇ ವಿಷಯವನ್ನು ವಿಷಧೀಕರಿಸುತ್ತಿದ್ದೆ.ನನ್ನ ಕಾರ್ಯ ಕ್ಷಮತೆಯನ್ನು ಅವರು ಬಹುಬಾಗಿ ಮೆಚ್ಚಿಕೊಂಡಿದ್ದರು.ಕೆಲಸದಲ್ಲಿ ನಾನಿಟ್ಟಿರುವ ನಿಷ್ಠೆ ಮತ್ತು ಯಾವುದೇ ವಿಷಯವನ್ನು ಆಳವಾಗಿ ಅಭ್ಯಸಿಸಿ ಕರಾರುವಕ್ಕಾಗಿ ಸಾದರಪಡಿಸುತ್ತಿದ್ದ ನನ್ನನ್ನು ನಿರ್ಮಲವಾದ ಮನಸ್ಸಿನಿಂದ ಕೊಂಡಾಡುತ್ತಿದ್ದರು.ಹೀಗೆ ಅವರು ಅನೇಕ ಮಹನೀಯರೊಂದಿಗೆ ನನ್ನ ನಡೆಯನ್ನು ಹಂಚಿಕೊಂಡು ಪ್ರಶಂಸೆ ಮಾಡಿರುವುದನ್ನು ಹಲವರಿಂದ ನಾನು ಕೇಳಿ ತಿಳಿದುಕೊಂಡಿದ್ದೇನೆ."ನಿನ್ನನ್ನು ಇಲಾಖೆಯವರು ಸರಿಯಾಗಿ ಗುರುತಿಸಿಲ್ಲವೆಂದು ನನಗೆ ಅನಿಸುತ್ತಿದೆ,ನಿನ್ನಂತವರು ಕೇಂದ್ರ ಕಛೇರಿಯಲ್ಲಿದ್ದರೆ ಅನೇಕ ಸಮಸ್ಯೆಗಳಿಗೆ ನೀನು ಉತ್ತರವಾಗುತ್ತಿದ್ದಿ "ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದುಂಟು!
 ಕಳೆದ ವರ್ಷ (2015) ಜಿಲ್ಲಾಡಳಿತದಿಂದ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಅವರು ಅತ್ಯಂತ ಚಿತ್ತಾಕರ್ಷಕವಾಗಿ,ವಿನೂತನವಾಗಿ,ಅಚ್ಚುಕಟ್ಟುತನದಿಂದ ಸಂಘಟಿಸಿದ್ದರು.ಪ್ರವಾಸೋದ್ಯಮ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಪ್ರವರ್ತಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜಾಗೃತಿ ಮೂಡಿಸಿದ್ದು ಅವರ ಕರ್ತವ್ಯ ಪಾಲನೆಯ ದ್ಯೋತಕವಾಯಿತು.ವೇದಿಕೆಯಲ್ಲಿದ್ದ ಮಾನ್ಯ ಲೋಕ ಸಭಾ ಸದಸ್ಯರು,ವಿಧಾನಸಭೆಯ ಸದಸ್ಯರು ಶ್ರೀಯುತ ವಿನಯ ಕುಮಾರ್ ಕುಲಕರ್ಣಿಯವರ ಕ್ರಿಯಾಶೀಲ ವ್ಯಕ್ತಿತ್ವವನ್ನು ಬಹುವಾಗಿ ಶ್ಲಾಘಿಸಿ ಮೆಚ್ಚಿದ್ದರು. ಜಿಲ್ಲಾಡಳಿತದಿಂದ ಕಿತ್ತೂರಿನಲ್ಲಿ ನಡೆದ 'ಚನ್ನಮ್ಮನ ಕಿತ್ತೂರು ಉತ್ಸವ ' ಹಲಸಿಯಲ್ಲಿ ನಡೆದ 'ಹಲಸಿ ಕದಂಬೋತ್ಸವ'ಗಳ ಯಶಸ್ಸಿಗೆ ಅವರು ಬಹುವಾಗಿ ಶ್ರಮಿಸಿದ್ದರು.
ಮೂಲತಃ ವಿಜಯಪುರದವಾರದ ಶ್ರೀಯುತ ವಿನಯಕುಮಾರ ಕುಲರ್ಣಿಯವರು ಬೆಳಗಾವಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾಗಿ ಒಂದು ವರ್ಷ ಮುಗಿಯುವ ಹೊತ್ತಿಗೆ ಸರಿಯಾಗಿ ಸರ್ಕಾರವು ಅವರನ್ನು ಬಾಗಲಕೋಟೆ ತಹಶೀಲ್ದಾರರನ್ನಾಗಿ ವರ್ಗಾಯಿಸಿತು.ನಮ್ಮ ಇಲಾಖೆಯಲ್ಲಿ ಸುಂದರ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಅವರು 19-08-2016 ರಂದು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶಗಳ ಅನ್ವಯ ಅಧಿಕಾರವನ್ನು ನನಗೆ ಹಸ್ತಾಂತರಿಸಿ ಕರ್ತವ್ಯದಿಂದ ಬಿಡುಗಡೆಯಾಗಿ ಬಾಗಲಕೋಟೆ ತಹಶೀಲ್ದಾರ ಹಾಗೂ ತಾಲೂಕು ಮ್ಯಾಜಿಸ್ಟ್ರೇಟರ್ ಹುದ್ದೆಗೆ ವರದಿ ಮಾಡಿಕೊಳ್ಳಲು ತೆರಳಿದಾಗ ನಾವು ಭಾರವಾದ ಮನಸ್ಸಿನಿಂದಲೇ ಬೀಳ್ಕೊಟ್ಟೆವು.ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು.

-ಬನವಾಸಿ ಸೋಮಶೇಖರ್.

No comments:

Post a Comment