Saturday 15 October 2011

"ಬಾಳ ದೀಪಿಕೆ"

ಎದೆಯಾಳದಿಂದ ಬಂದಿತು ಪ್ರೀತಿ
ಮನಸಾಗಿ ಸೇರಿತು ಆರದ ಜ್ಯೋತಿ
ಹೊನಲಾಗಿ ಹರಿಯಿತು ಬಾಳಿನ ರೀತಿ
ಒಲವಾಗಿ ಗೆಲುವಾತು ಜೀವಕ್ಕೆ ನೀತಿ!

ಮಾಗಿಯ ಬಿಸಿಲಿಗೆ ಮಲ್ಲಿಗೆಯ ಕಂಪು
ಗಗನದ ತಾರೆಗೆ ಮಿನುಗುವ ಸೊಂಪು
ಎನ್ನೊಡಲಿನೊಲವಿಗೆ ನೀನೇ ತಂಪು
ಪ್ರಭೆಯ ಬೀರುತ ಎನ್ನೆದೆಗೆರೆದೆ ವಾತ್ಸಲ್ಯದ ಇಂಪು.!!



  = ಬನವಾಸಿ ಸೋಮಶೇಖರ್.

No comments:

Post a Comment